ನಮಸ್ಕಾರಗಳು. ಇಂದಿನ ಈ ಕಾಲಮಾನ ಮನುಕುಲಕ್ಕೇ ಒಂದು ಮಹತ್ತರವಾದ ಘಟ್ಟ. .ನಾವು ಊಹೆ ಕೂಡ ಮಾಡದ ಒಂದು ಪರಿಸ್ಥಿತಿಗೆ ಎದುರಾಗಿ ನಿಂತಿದ್ದೇವೆ..ಇಂತಹ ಸಂದಿಗ್ಧ ಪರಿಸ್ಥಿತಿಗಳು ನಮ್ಮನ್ನು ಇನ್ನಿಷ್ಟು ಗಟ್ಟಿಗೊಳಿಸಲು ಬಂದಿರುವ ಸವಾಲುಗಳು ಎಂದು ಧನಾತ್ಮಕ ವಾಗಿ ಯೋಚಿಸಿದರೆ ನಾವು ಧೃತಿಗೆಡದೆ ಸವಾಲುಗಳನ್ನು ಎದಿರಿಸಬಹುದು. ಇಲ್ಲಿಯವರೆಗೂ ಮನುಕುಲವು ಇಂಥಃ ಸಂದಿಗ್ಧ ಪರಿಸ್ಥಿತಿಗಳನ್ನು ಅನೇಕ ಬಾರಿ ಎದುರಿಸಿ ಜಯಶಾಲಿಯಾಗಿದೆ.. ಹೌದು..ಆದ ಕಷ್ಟನಷ್ಟಗಳೂ ಅಪಾರ.....ಆದರೂ ಮಾನವ ಎಂದಿಗೂ ಸೋಲಲಿಲ್ಲ. ಬಂದ ಕಷ್ಟಕರ ಸನ್ನಿವೇಶಗಳನ್ನು ನಿವಾರಿಸಿಕೊಂಡು ಮುಂದೆ ಸಾಗಿದ್ದಾನೆ. ಇಂತಹ ಸಂದರ್ಭಗಳಲ್ಲಿ ನಮ್ಮ ಇತಿಮಿತಿಗಳು, ನಮ್ಮ ಧೈರ್ಯ , ನಮ್ಮ ಶಕ್ತಿಗಳು ಓರೆ ಹಚ್ಚಲಾಗುತ್ತವೆ. ಮಾನವೀಯತೆಯ ಅನಾವರಣವೂ ಈ ಕಾಲಘಟ್ಟದಲ್ಲೇ ಆಗುವುದು. ಅನೇಕ ಕ್ಷೇತ್ರ ಗಳು ಈ "ಕರೋನಾ" ಎಂಬ ಮಹಾಮಾರಿಯಿಂದ ಸಂಕಷ್ಟಕ್ಕೀಡಾಗಿವೆ.ನಾನು ಪ್ರೀತಿಯಿಂದ ಆರಿಸಿಕೊಂಡ ಕ್ಷೇತ್ರ ಶಿಕ್ಷಣ ಕ್ಷೇತ್ರ.... ಕಲಿಯುವ ಆಸಕ್ತಿ ಇರುವಂತಹವರಿಗೆ ಹೇಳಿಮಾಡಿಸಿದಂತಹ ಕ್ಷೇತ್ರ..ನಮ್ಮ ಈ ಪವಿತ್ರವಾದ ಕೆಲಸದಲ್ಲಿ "ಮಕ್ಕಳೇ ನಮ್ಮ ದೇವರು.ಮಕ್ಕಳೇ ನಮ್ಮ ಅನ್ನದಾತರು"... ಆದರೆ ಶಾಲೆಗಳಲ್ಲಿ ಮಕ್ಳು ಸೇರುವ ಹಾಗಿಲ್ಲ... ಜೊತೆಗೆ ಆಟ,ಪಾಠ,ನಲಿವು,ಕಲಿವು ಯಾವುದೂ ಇಲ್ಲ.... ಮಕ್ಕಳಿಗೂ ಬೇಜಾರು..... ತಮ್ಮ ನೆಚ್ಚಿನ ಶಿಕ್ಷಕರ ಒಡನಾಟ ಇಲ್ಲ, ಅ...